Monday, March 11, 2013

ಹಾಸನ ನಗರಸಭೆ ಚುನಾವಣೆ-2013


ಹಾಸನ ಸುದ್ದಿ : ೦೧
ಅಂತೂ ಎಲ್ಲಾರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸ್ಥಂಸ್ಥೆಗಳ ಚುನಾವಣೆಯು ಮುಗಿದಿದ್ದು, ಜಿಲ್ಲೆಯ ೫ ಪುರಸಭೆ, ೨ ಪಟ್ಟಣ ಪಂಚಾಯ್ತಿ ಮತ್ತು ೧ ನಗರ ಸಭೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

೮ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು ಹಾಗೂ ಸಕಲೇಶಪುರ ಪುರಸಭೆ ಹಾಗೂ ಹಾಸನ ನಗರಸಭೆ ಸೇರಿದಂತೆ ೫ ಸ್ಥಾನವನ್ನು ಜೆಡಿಎಸ್ ಪಾಲಾದರೆ, ಆಲೂರು ಪ.ಪಂಚಾಯ್ತಿ ಕೆಜೆಪಿ ಪಾಲಾಗಿದೆ. ಉಳಿದಂತೆ ಅರಸೀಕರೆ ಪುರಸಭೆ ತಲಾ ಕಾಂಗ್ರೆಸ್ ಹಾಗೂ ಜೆಡಿಸ್ ೧೧-೧೧ ಸ್ಥಾನಗಳನ್ನು ಹಾಗೂ ೧ ಪಕ್ಷೇತ್‌ಹಾಗೂ ಅರಕಲಗೂಡು ಪುರಸಭೆಗಳು ಅಂತಂತ್ರ ಸ್ಥಿತಿ ನಿರ್ಮಾಣ ವಾಗಿದ್ದು, ಇದೇ ರೀತಿ ಅರಕಲಗೂಡು ಪ.ಪಂ.ಯಲ್ಲಿ ಕಾಂಗ್ರೆಸ್ ೭ಸ್ಥಾನವನ್ನು ಗಳಿಸಿದರೆ, ೫ ಸ್ಥಾನವನ್ನು ಜೆಡಿಎಸ್ ಗಳಿದ್ದು, ಉಳಿದ ೩ ಸ್ಥಾನಗಳು ಪಕ್ಷೇತರರ ಪಾಲಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಹಾಸನ ನಗರಸಭೆಯ ೩೫ವಾರ್ಡ್‌ಗಳಲ್ಲಿ ೧೯ ಸ್ಥಾನವನ್ನು ಜೆಡಿಎಸ್ ಪಡೆದಕೊಂಡು ಈಬಾರಿಯೂ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿದಕೊಂಡಿದೆ. ಉಳಿದಂತೆ ೯ ಸ್ಥಾನವನ್ನು ಕಾಂಗ್ರೆಸ್, ೧ ಸ್ಥಾನವನ್ನು ಬಿಜೆಪಿ ಪಡೆದರೆ ಕೆಜೆಪಿಯೂ ಕೂಡಾ ಒಂದು ಸ್ಥಾನವನ್ನು ಪಡೆದು ತನ್ನ ಖಾತೆಯನ್ನು ತೆರೆದಿದ್ದು, ಉಳಿದ ೫ ವಾರ್ಡ್‌ಗಳು ಪಕ್ಷೇತರರ ಪಾಲಾಗಿದೆ. 
ಹಾಗೇ ಚನ್ನರಾಯಪಟ್ಟಣದಲ್ಲಿಯೂ ಕೂಡಾ ಜೆಡಿಎಸ್(೧೨), ಕಾಂಗ್ರೇಸ್(೮) ಪಕ್ಷೇತರ(೧) ಬಂಡಾಯ ಕಾಂಗ್ರೇಸ್(೨) ಸ್ಥಾನಗಳಿಸಿದೆ.
ಹೊಳೆನರಸೀಪುರದಲ್ಲಿ ಒಟ್ಟು ಜೆಡಿಎಸ್ (೧೬), ಕಾಂಗ್ರೆಸ್ (೫) ಪಕ್ಷೇತರ(೨) ಸ್ಥಾನಗಳನ್ನು ಪಡೆದಿವೆ. ಆದರೆ ಚುನಾವಣೆಯಲ್ಲಿ ಜೆಡಿಎಸ್ ೧೪ ಸ್ಥಾನಗಳನ್ನು ಪಡೆದಿದ್ದು, ಉಳಿದ ೨ಸ್ಥಾನಗಳು ಚುನಾವಣೆಗೂ ಮುನ್ನವೇ ಅವಿರೋಧವಾಗಿ ಆಯ್ಕೆಯಾಗಿದ್ದರು. 
ಹಾಗೂ ಸಕಲೇಶಪುರದಲ್ಲಿ ಈಬಾರಿ ೧೧ ಸ್ಥಾನವನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ ೬ಸ್ಥಾನಗಳನ್ನು ಪಡೆದು ಕಾಂಗ್ರೆಸ್ ನಂತರದ ಸ್ಥಾನದಲ್ಲಿದ್ದೆ. ಜೊತೆಗೆ ಬಿಜೆಪಿ-೨, ಕೆಜೆಪಿ-೨, ಹಾಗೂ ಪಕ್ಷೇತರರರು ೨ಸ್ಥಾನವನ್ನು ಪಡೆದಿದ್ದಾರೆ. 
ಉಳಿದ ಬೇಲೂರು ಪುರಸಭೆಯಲ್ಲಿ ೧೨ಸ್ಥಾನವನ್ನು ಜೆಡಿಎಸ್, ೯ಸ್ಥಾನವನ್ನು ಕಾಂಗ್ರೆಸ್ ಹಾಗೂ ೨ಸ್ಥಾನಗಳು ಪಕ್ಷೇತರರ ಪಾಲಾಗಿದ್ದು,  ಜೆಡಿಎಸ್ ಮತ್ತೊಮ್ಮೆ ಪುರಸಭೆಯ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿದಕೊಂಡಿದ್ದು, ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಹಾಸನ ಜಿಲ್ಲೆ ಮತ್ತೆ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಗದ್ದುಗೆಯನ್ನೇರುವುದರ ಮೂಲಕ ಮತ್ತೆ ತನ್ನ ಪಾರುಪತ್ಯವನ್ನು ಮೆರೆಯಲಿದೆ.  

ಹಾಸನ ಸುದ್ದಿ : ೦೨
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿದ ಅಭ್ಯರ್ಥಿಗಳ ವಿವರಗಳು ಇಂತಿದೆ. 
ಹಾಸಸನ ನಗರಸಭೆ: 
೧ನೇ ವಾರ್ಡ್ ಸಿ.ಎಂ. ಭಾನು ಪ್ರಕಾಶ್ (ಜೆಡಿಎಸ್), ೨ನೇ ವಾರ್ಡ್-ಶೋಭಾ ಗಣೇಶ್(ಕಾಂಗ್ರೆಸ್), ೩ನೇವಾರ್ಡ್-ಸುರೇಶ್‌ಕುಮಾರ್(ಪಕ್ಷೇತರ ಅಭ್ಯರ್ಥಿ), ೪ನೇ ವಾರ್ಡ್-ಲೀಲಾವತಿ ವಾಸು (ಜೆ.ಡಿ.ಸ್), ೫ನೇವಾರ್ಡ್-ಆರ್.ಅಂಬಿಕಾ ರವಿಶಂಕರ್ (ಜೆಡಿಎಸ್),೬ನೇವಾರ್ಡ್-ಪ್ರಸನ್ನಕೃಷ್ಣಮೂರ್ತಿ(ಜೆ.ಡಿ.ಸ್),೭ನೇವಾರ್ಡ್-ಎಂ.ಎ.ಇಂದುಮತಿ(ಕಾಂಗ್ರೆಸ್),೮ನೇವಾರ್ಡ್-ನೇತ್ರಾವತಿ ಗಿರೀಶ್ (ಜೆಡಿಎಸ್), ೯ನೇವಾರ್ಡ್-ಡಾ: ಹೆಚ್.ಎಸ್.ಅನಿಲ್ (ಜೆಡಿಎಸ್), ೧೦ನೇವಾರ್ಡ್-ಹೆಚ್.ಎಂ.ಯಶವಂತ್(ಕಾಂಗ್ರೆಸ್), ೧೧ನೇವಾರ್ಡ್-ಕುಮಾರ್(ಕಾಂಗ್ರೆಸ್), ೧೨ನೇವಾರ್ಡ್ ಹೆಚ್.ಎಸ್. ಪ್ರಸನ್ನ ಕುಮಾರ್(ಪಕ್ಷೇತರ), ೧೩ನೇವಾರ್ಡ್-ಪಾರ್ವತಿ(ಪಕ್ಷೇತರ), ೧೪ನೇವಾರ್ಡ್- ಬಿ.ಎಸ್. ಉಷಾ (ಕೆ.ಜೆ.ಪಿ.), ೧೫ನೇವಾರ್ಡ್- ಮಹೇಶ್ ಕೆ.ಆರ್. (ಜೆಡಿಎಸ್), ೧೬ನೇವಾರ್ಡ್- ಹೆಚ್.ಎಲ್. ವಿಜಯಕುಮಾರ್ (ಜೆಡಿಎಸ್), ೧೭ನೇವಾರ್ಡ್- ಅಜಾಜ್ ಪಾಷಾ(ಜೆ.ಡಿ.ಸ್), ೧೮ನೇವಾರ್ಡ್-ಆರೀಫ್ ಖಾನ್(ಕಾಂಗ್ರೆಸ್), ೧೯ನೇವಾರ್ಡ್-ಜಿ.ಆರ್.ರಮೇಶ್(ಬಿ.ಜೆ.ಪಿ.), ೨೦ನೇವಾರ್ಡ್-ಅಮೀರ್ ಜಾನ್(ಪಕ್ಷೇತರ), ೨೧ನೇವಾರ್ಡ್-ಇಶ್ರಾದ್ ಪಾಷಾ (ಜೆಡಿಎಸ್), ೨೨ನೇವಾರ್ಡ್- ಅಬ್ದುಲ್ ಕಯುಮ್ (ಕಾಂಗ್ರೆಸ್), ೨೩ನೇವಾರ್ಡ್-ಶಾರದಮ್ಮ (ಜೆಡಿಎಸ್), ೨೪ನೇವಾರ್ಡ್- ಹೆಚ್.ಆರ್.ಪ್ರಸನ್ನ ಕುಮಾರ್(ಅಪ್ಪು), (ಜೆಡಿಎಸ್), ೨೫ನೇವಾರ್ಡ್- ಹೆಚ್.ಬಿ. ಗೋಪಾಲ (ಜೆಡಿಎಸ್), ೨೬ನೇವಾರ್ಡ್- ಟಿ. ನಿರ್ಮಲ ಯೋಗೀಶ್ (ಜೆಡಿಎಸ್), ೨೭ನೇವಾರ್ಡ್-ಸೀತಮ್ಮ (ಜೆಡಿಎಸ್), ೨೮ನೇವಾರ್ಡ್-ಸಯ್ಯದ್ ತಲಹ (ಕಾಂಗ್ರೆಸ್), ೨೯ನೇವಾರ್ಡ್-ಎಂ.ಕೆ. ರಾಜೇಶ್(ಬಾಬಿ), (ಕಾಂಗ್ರೆಸ್), ೩೦ನೇವಾರ್ಡ್-ಸಿ. ಶುಭ (ಜೆಡಿಎಸ್), ೩೧ನೇವಾರ್ಡ್- ಹೆಚ್.ಹೆಚ್. ಶ್ರೀವಿದ್ಯಾ, (ಜೆಡಿಎಸ್), ೩೨ನೇವಾರ್ಡ್- ಹೆಚ್.ಎಸ್. ಶಂಕರ್ (ಜೆಡಿಎಸ್), ೩೩ನೇವಾರ್ಡ್-ಸಮೀರ್ ಮೊಹಿದ್ದೀನ್ (ಪಕ್ಷೇತರ), ೩೪ನೇವಾರ್ಡ್-ಸಿ.ಟಿ.ಕುಮಾರ(ಕಾಂಗ್ರೆಸ್), ೩೫ನೇವಾರ್ಡ್- ಹೇಮಾವತಿ (ಜೆಡಿಎಸ್) ಜಯಗಳಿಸಿದ್ದಾರೆ. 

ಹಾಸನ ನಗರಸಭೆ ಚುನಾವಣೆ-2013


ಹಾಸನ ಸುದ್ದಿ : ೦೧
ಅಂತೂ ಎಲ್ಲಾರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸ್ಥಂಸ್ಥೆಗಳ ಚುನಾವಣೆಯು ಮುಗಿದಿದ್ದು, ಜಿಲ್ಲೆಯ ೫ ಪುರಸಭೆ, ೨ ಪಟ್ಟಣ ಪಂಚಾಯ್ತಿ ಮತ್ತು ೧ ನಗರ ಸಭೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

೮ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು ಹಾಗೂ ಸಕಲೇಶಪುರ ಪುರಸಭೆ ಹಾಗೂ ಹಾಸನ ನಗರಸಭೆ ಸೇರಿದಂತೆ ೫ ಸ್ಥಾನವನ್ನು ಜೆಡಿಎಸ್ ಪಾಲಾದರೆ, ಆಲೂರು ಪ.ಪಂಚಾಯ್ತಿ ಕೆಜೆಪಿ ಪಾಲಾಗಿದೆ. ಉಳಿದಂತೆ ಅರಸೀಕರೆ ಪುರಸಭೆ ತಲಾ ಕಾಂಗ್ರೆಸ್ ಹಾಗೂ ಜೆಡಿಸ್ ೧೧-೧೧ ಸ್ಥಾನಗಳನ್ನು ಹಾಗೂ ೧ ಪಕ್ಷೇತ್‌ಹಾಗೂ ಅರಕಲಗೂಡು ಪುರಸಭೆಗಳು ಅಂತಂತ್ರ ಸ್ಥಿತಿ ನಿರ್ಮಾಣ ವಾಗಿದ್ದು, ಇದೇ ರೀತಿ ಅರಕಲಗೂಡು ಪ.ಪಂ.ಯಲ್ಲಿ ಕಾಂಗ್ರೆಸ್ ೭ಸ್ಥಾನವನ್ನು ಗಳಿಸಿದರೆ, ೫ ಸ್ಥಾನವನ್ನು ಜೆಡಿಎಸ್ ಗಳಿದ್ದು, ಉಳಿದ ೩ ಸ್ಥಾನಗಳು ಪಕ್ಷೇತರರ ಪಾಲಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಹಾಸನ ನಗರಸಭೆಯ ೩೫ವಾರ್ಡ್‌ಗಳಲ್ಲಿ ೧೯ ಸ್ಥಾನವನ್ನು ಜೆಡಿಎಸ್ ಪಡೆದಕೊಂಡು ಈಬಾರಿಯೂ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿದಕೊಂಡಿದೆ. ಉಳಿದಂತೆ ೯ ಸ್ಥಾನವನ್ನು ಕಾಂಗ್ರೆಸ್, ೧ ಸ್ಥಾನವನ್ನು ಬಿಜೆಪಿ ಪಡೆದರೆ ಕೆಜೆಪಿಯೂ ಕೂಡಾ ಒಂದು ಸ್ಥಾನವನ್ನು ಪಡೆದು ತನ್ನ ಖಾತೆಯನ್ನು ತೆರೆದಿದ್ದು, ಉಳಿದ ೫ ವಾರ್ಡ್‌ಗಳು ಪಕ್ಷೇತರರ ಪಾಲಾಗಿದೆ. 
ಹಾಗೇ ಚನ್ನರಾಯಪಟ್ಟಣದಲ್ಲಿಯೂ ಕೂಡಾ ಜೆಡಿಎಸ್(೧೨), ಕಾಂಗ್ರೇಸ್(೮) ಪಕ್ಷೇತರ(೧) ಬಂಡಾಯ ಕಾಂಗ್ರೇಸ್(೨) ಸ್ಥಾನಗಳಿಸಿದೆ.
ಹೊಳೆನರಸೀಪುರದಲ್ಲಿ ಒಟ್ಟು ಜೆಡಿಎಸ್ (೧೬), ಕಾಂಗ್ರೆಸ್ (೫) ಪಕ್ಷೇತರ(೨) ಸ್ಥಾನಗಳನ್ನು ಪಡೆದಿವೆ. ಆದರೆ ಚುನಾವಣೆಯಲ್ಲಿ ಜೆಡಿಎಸ್ ೧೪ ಸ್ಥಾನಗಳನ್ನು ಪಡೆದಿದ್ದು, ಉಳಿದ ೨ಸ್ಥಾನಗಳು ಚುನಾವಣೆಗೂ ಮುನ್ನವೇ ಅವಿರೋಧವಾಗಿ ಆಯ್ಕೆಯಾಗಿದ್ದರು. 
ಹಾಗೂ ಸಕಲೇಶಪುರದಲ್ಲಿ ಈಬಾರಿ ೧೧ ಸ್ಥಾನವನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ ೬ಸ್ಥಾನಗಳನ್ನು ಪಡೆದು ಕಾಂಗ್ರೆಸ್ ನಂತರದ ಸ್ಥಾನದಲ್ಲಿದ್ದೆ. ಜೊತೆಗೆ ಬಿಜೆಪಿ-೨, ಕೆಜೆಪಿ-೨, ಹಾಗೂ ಪಕ್ಷೇತರರರು ೨ಸ್ಥಾನವನ್ನು ಪಡೆದಿದ್ದಾರೆ. 
ಉಳಿದ ಬೇಲೂರು ಪುರಸಭೆಯಲ್ಲಿ ೧೨ಸ್ಥಾನವನ್ನು ಜೆಡಿಎಸ್, ೯ಸ್ಥಾನವನ್ನು ಕಾಂಗ್ರೆಸ್ ಹಾಗೂ ೨ಸ್ಥಾನಗಳು ಪಕ್ಷೇತರರ ಪಾಲಾಗಿದ್ದು,  ಜೆಡಿಎಸ್ ಮತ್ತೊಮ್ಮೆ ಪುರಸಭೆಯ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿದಕೊಂಡಿದ್ದು, ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಹಾಸನ ಜಿಲ್ಲೆ ಮತ್ತೆ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಗದ್ದುಗೆಯನ್ನೇರುವುದರ ಮೂಲಕ ಮತ್ತೆ ತನ್ನ ಪಾರುಪತ್ಯವನ್ನು ಮೆರೆಯಲಿದೆ.  

ಹಾಸನ ಸುದ್ದಿ : ೦೨
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿದ ಅಭ್ಯರ್ಥಿಗಳ ವಿವರಗಳು ಇಂತಿದೆ. 
ಹಾಸಸನ ನಗರಸಭೆ: 
೧ನೇ ವಾರ್ಡ್ ಸಿ.ಎಂ. ಭಾನು ಪ್ರಕಾಶ್ (ಜೆಡಿಎಸ್), ೨ನೇ ವಾರ್ಡ್-ಶೋಭಾ ಗಣೇಶ್(ಕಾಂಗ್ರೆಸ್), ೩ನೇವಾರ್ಡ್-ಸುರೇಶ್‌ಕುಮಾರ್(ಪಕ್ಷೇತರ ಅಭ್ಯರ್ಥಿ), ೪ನೇ ವಾರ್ಡ್-ಲೀಲಾವತಿ ವಾಸು (ಜೆ.ಡಿ.ಸ್), ೫ನೇವಾರ್ಡ್-ಆರ್.ಅಂಬಿಕಾ ರವಿಶಂಕರ್ (ಜೆಡಿಎಸ್),೬ನೇವಾರ್ಡ್-ಪ್ರಸನ್ನಕೃಷ್ಣಮೂರ್ತಿ(ಜೆ.ಡಿ.ಸ್),೭ನೇವಾರ್ಡ್-ಎಂ.ಎ.ಇಂದುಮತಿ(ಕಾಂಗ್ರೆಸ್),೮ನೇವಾರ್ಡ್-ನೇತ್ರಾವತಿ ಗಿರೀಶ್ (ಜೆಡಿಎಸ್), ೯ನೇವಾರ್ಡ್-ಡಾ: ಹೆಚ್.ಎಸ್.ಅನಿಲ್ (ಜೆಡಿಎಸ್), ೧೦ನೇವಾರ್ಡ್-ಹೆಚ್.ಎಂ.ಯಶವಂತ್(ಕಾಂಗ್ರೆಸ್), ೧೧ನೇವಾರ್ಡ್-ಕುಮಾರ್(ಕಾಂಗ್ರೆಸ್), ೧೨ನೇವಾರ್ಡ್ ಹೆಚ್.ಎಸ್. ಪ್ರಸನ್ನ ಕುಮಾರ್(ಪಕ್ಷೇತರ), ೧೩ನೇವಾರ್ಡ್-ಪಾರ್ವತಿ(ಪಕ್ಷೇತರ), ೧೪ನೇವಾರ್ಡ್- ಬಿ.ಎಸ್. ಉಷಾ (ಕೆ.ಜೆ.ಪಿ.), ೧೫ನೇವಾರ್ಡ್- ಮಹೇಶ್ ಕೆ.ಆರ್. (ಜೆಡಿಎಸ್), ೧೬ನೇವಾರ್ಡ್- ಹೆಚ್.ಎಲ್. ವಿಜಯಕುಮಾರ್ (ಜೆಡಿಎಸ್), ೧೭ನೇವಾರ್ಡ್- ಅಜಾಜ್ ಪಾಷಾ(ಜೆ.ಡಿ.ಸ್), ೧೮ನೇವಾರ್ಡ್-ಆರೀಫ್ ಖಾನ್(ಕಾಂಗ್ರೆಸ್), ೧೯ನೇವಾರ್ಡ್-ಜಿ.ಆರ್.ರಮೇಶ್(ಬಿ.ಜೆ.ಪಿ.), ೨೦ನೇವಾರ್ಡ್-ಅಮೀರ್ ಜಾನ್(ಪಕ್ಷೇತರ), ೨೧ನೇವಾರ್ಡ್-ಇಶ್ರಾದ್ ಪಾಷಾ (ಜೆಡಿಎಸ್), ೨೨ನೇವಾರ್ಡ್- ಅಬ್ದುಲ್ ಕಯುಮ್ (ಕಾಂಗ್ರೆಸ್), ೨೩ನೇವಾರ್ಡ್-ಶಾರದಮ್ಮ (ಜೆಡಿಎಸ್), ೨೪ನೇವಾರ್ಡ್- ಹೆಚ್.ಆರ್.ಪ್ರಸನ್ನ ಕುಮಾರ್(ಅಪ್ಪು), (ಜೆಡಿಎಸ್), ೨೫ನೇವಾರ್ಡ್- ಹೆಚ್.ಬಿ. ಗೋಪಾಲ (ಜೆಡಿಎಸ್), ೨೬ನೇವಾರ್ಡ್- ಟಿ. ನಿರ್ಮಲ ಯೋಗೀಶ್ (ಜೆಡಿಎಸ್), ೨೭ನೇವಾರ್ಡ್-ಸೀತಮ್ಮ (ಜೆಡಿಎಸ್), ೨೮ನೇವಾರ್ಡ್-ಸಯ್ಯದ್ ತಲಹ (ಕಾಂಗ್ರೆಸ್), ೨೯ನೇವಾರ್ಡ್-ಎಂ.ಕೆ. ರಾಜೇಶ್(ಬಾಬಿ), (ಕಾಂಗ್ರೆಸ್), ೩೦ನೇವಾರ್ಡ್-ಸಿ. ಶುಭ (ಜೆಡಿಎಸ್), ೩೧ನೇವಾರ್ಡ್- ಹೆಚ್.ಹೆಚ್. ಶ್ರೀವಿದ್ಯಾ, (ಜೆಡಿಎಸ್), ೩೨ನೇವಾರ್ಡ್- ಹೆಚ್.ಎಸ್. ಶಂಕರ್ (ಜೆಡಿಎಸ್), ೩೩ನೇವಾರ್ಡ್-ಸಮೀರ್ ಮೊಹಿದ್ದೀನ್ (ಪಕ್ಷೇತರ), ೩೪ನೇವಾರ್ಡ್-ಸಿ.ಟಿ.ಕುಮಾರ(ಕಾಂಗ್ರೆಸ್), ೩೫ನೇವಾರ್ಡ್- ಹೇಮಾವತಿ (ಜೆಡಿಎಸ್) ಜಯಗಳಿಸಿದ್ದಾರೆ. 

ಪುರಸಭೆಗಳ ಚುನಾವಣೆ-2013



ಹಾಸನ ಸುದ್ದಿ : ೦೩
ಸಕಲೇಶಪುರ ಪುರಸಭೆಗೆ ನಡೆದ ಚುನಾವಣೆಯಲ್ಲಿ ಜೆ.ಡಿ.ಎಸ್ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದರು ಸಹ ೨ ಪಕ್ಷೇತರರ ನೆರವಿನಿಂದ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಒಟ್ಟು ೨೩ ವಾರ್ಡ್‌ಗಳಲ್ಲಿ ೧೧(ಜೆ.ಡಿ.ಎಸ್), ೬(ಕಾಂಗ್ರೆಸ್), ೨(ಬಿ.ಜೆ.ಪಿ), ೨(ಕೆ.ಜೆ.ಪಿ), ೨(ಪಕ್ಷೇತರ) ಅಭ್ಯರ್ಥಿಗಳು ಜಯಶೀಲರಾಗಿರುತ್ತಾರೆ. ವಾರ್ಡ್‌ವಾರು ವಿಜೇತರ ಪಟ್ಟಿ ಇಂತಿದೆ.
ಸಕಲೇಶಪುರ : ೧ನೇ ವಾರ್ಡ್ :ಸತ್ಯವತಿ(ಬಿಜೆಪಿ), ೨ನೇ ವಾರ್ಡ್ :ಮಹೇಶ್(ಬಿಜೆಪಿ), ೩ನೇ ವಾರ್ಡ್ :ನಿರ್ವಾಣಯ್ಯ(ಜೆಡಿಎಸ್), ೪ನೇ ವಾರ್ಡ್ :ಮುಖೇಶ್ ಶೆಟ್ಟಿ (ಜೆಡಿಎಸ್), ೫ನೇವಾರ್ಡ್ :ವೆಂಕಟೇಶ್ (ಜೆಡಿಎಸ್), ೬ನೇವಾರ್ಡ್ :ಸಂತೋಷ್ ಜೈನ್(ಜೆಡಿಎಸ್), ೭ನೇವಾರ್ಡ್ :ಕಾಳಿಂಗಪ್ಪ(ಕಾಂಗ್ರೆಸ್), ೮ನೇವಾರ್ಡ್ :ಶೋಭ(ಕಾಂಗ್ರೆಸ್), ೯ನೇ ವಾರ್ಡ್ :ಸಯ್ಯದ್‌ಮುಫೀಜ್(ಕಾಂಗ್ರೆಸ್), ೧೦ನೇವಾರ್ಡ್ :ಪದ್ಮ (ಕಾಂಗ್ರೆಸ್), ೧೦ನೇವಾರ್ಡ್ :ಸುಮಿತ್ರ(ಕಾಂಗ್ರೆಸ್), ೧೨ನೇ ವಾರ್ಡ್ :ಎಸ್.ಕೆ.ಸೂರ್ಯ(ಪಕ್ಷೇತರ), ೧೩ನೇವಾರ್ಡ್ :ರುದ್ದಕುಮಾರ್(ಕೆಜೆಪಿ), ೧೪ನೇ ವಾರ್ಡ್ :ರೇಖಾ(ಕೆಜೆಪಿ), ೧೫ನೇವಾರ್ಡ್ :ಭಾಗ್ಯ(ಜೆಡಿಎಸ್), ೧೬ನೇ ವಾರ್ಡ್ :ಸಮೀರ್(ಜೆಡಿಎಸ್), ೧೭ನೇ ವಾರ್ಡ್ :ಸತೀಶ್(ಜೆಡಿಎಸ್), ೧೮ನೇವಾರ್ಡ್ :ಎಂ.ಎಸ್.ಗಿರೀಶ್(ಪಕ್ಷೇತರ), ೧೯ನೇ ವಾರ್ಡ್ :ಲಲಿತಮ್ಮ(ಜೆಡಿಎಸ್), ೨೦ನೇ ವಾರ್ಡ್ :ತಾಜುನೀಸ್ (ಜೆಡಿಎಸ್), ೨೧ನೇ ವಾರ್ಡ್ :ಜೆ.ಬಿ.ಡಿಸೋಜಾ(ಕಾಂಗ್ರೆಸ್), ೨೨ನೇ ವಾರ್ಡ್ :ಪುಷ್ಟವತಿ (ಜೆಡಿಎಸ್), ೨೩ನೇ ವಾರ್ಡ್ :ಉಮೇಶ್ (ಜೆಡಿಎಸ್), ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಅರಸೀಕರೆ ಸುದ್ದಿ : ೧ನೇ ವಾರ್ಡ್ ಪಂಚಾಕ್ಷರಿ (ಜೆ.ಡಿಎಸ್), ೨ನೇವಾರ್ಡ್ ಪಿ. ಬಾಲಮುರುಗನ್(ಕಾಂಗ್ರೆಸ್), ೩ನೇವಾರ್ಡ್ ಸಯ್ಯದ್ ಗಯಾಸುದ್ದೀನ್ (ಜೆ.ಡಿಎಸ್), ೪ನೇವಾರ್ಡ್ ಮಂಜುನಾಥ (ಜೆ.ಡಿಎಸ್), ೫ನೇ ವಾರ್ಡ್ ಸುರೇಶ್ ಆರ್ (ಜೆಡಿಎಸ್), ೬ನೇ ವಾರ್ಡ್ ಅನ್ನಪೂರ್ಣ (ಜೆಡಿಎಸ್), ೭ನೇ ವಾರ್ಡ್ ವೈ.ಜೆ.ಹಾಜಿವಲಿ(ಕಾಂಗ್ರೆಸ್), ೮ನೇ ವಾರ್ಡ್ ಭಾಗ್ಯಲತಾ ಮಂಜು(ಜೆಡಿಎಸ್), ೯ನೇ ವಾರ್ಡ್ ಮಂಜುಳ ಮಂಜುನಾಥ (ಕಾಂಗ್ರೆಸ್), ೧೦ನೇವಾರ್ಡ್ ಜಿ.ಗೌರಮ್ಮ (ಕಾಂಗ್ರೆಸ್), ೧೧ನೇ ವಾರ್ಡ್ ಖುಷಿ ಬಾಬು ಎಂ.ವಿ.(ಜೆಡಿಎಸ್), ೧೨ನೇ ವಾರ್ಡ್ ಗೀತಾ(ಕಾಂಗ್ರೆಸ್), ೧೩ನೇ ವಾರ್ಡ್ ಮಾಲಾಬಾಯಿ (ಕಾಂಗ್ರೆಸ್), ೧೪ನೇ ವಾರ್ಡ್ ಜೆ.ವಿ.ರಂಗನಾಥ (ಕಾಂಗ್ರೆಸ್), ೧೫ನೇ ವಾರ್ಡ್ ಎ.ಎಂ.ಶ್ರೀನಿವಾಸ (ಕಾಂಗ್ರೆಸ್), ೧೬ನೇ ವಾರ್ಡ್ ಪೈರೋಸ್ (ಜೆಡಿಎಸ್), ೧೭ನೇ ವಾರ್ಡ್ ಎಸ್.ಎಸ್.ಶೈಲೇಂದ್ರ ಕುಮಾರ್ (ಕೆಜೆಪಿ), ೧೮ನೇ ವಾರ್ಡ್ ಕಾಂತೇಶ್ (ಕಾಂಗ್ರೆಸ್), ೧೯ನೇ ವಾರ್ಡ್ ರೇಷ ಬಾನು (ಕಾಂಗ್ರೆಸ್), ೨೦ನೇ ವಾರ್ಡ್ ಕೆ.ಪಿ.ಬಬ್ರುವಾಹನರಾವ್ (ಪಕ್ಷೇತರ), ೨೧ನೇ ವಾರ್ಡ್ ವಿದ್ಯಾಧರ ಬಿ.ಎನ್ (ಪಕ್ಷೇತರ) ೨೨ನೇ ವಾರ್ಡ್ ಕೆ ಜೆ ಪಾರ್ಥಸಾರಥಿ (ಜೆಡಿಎಸ್), ೨೩ನೇ ವಾರ್ಡ್ ಎಂ ಸಮೀವುಲ್ಲಾ (ಜೆಡಿಎಸ್), ೨೪ನೇ ವಾರ್ಡ್ ಯುನಸ್ (ಪಕ್ಷೇತರ), ೨೫ನೇ ವಾರ್ಡ್ ಎ ಎಸ್ ಕೆ ನಸೀಮಾ ಭಾನು (ಜೆಡಿಎಸ್) ೨೬ನೇ ವಾರ್ಡ್ ಬಿ. ಗೀತಾ ವಿಶ್ವನಾಥ (ಕಾಂಗ್ರೆಸ್), ೨೭ನೇ ವಾರ್ಡ್ ಮೋಹನಕುಮಾರ ಕೆ.ಎನ್.(ಪಕ್ಷೇತರ)ಅಭ್ಯರ್ಥಿಗಳು ಜಯಗಳಿಸಿದರೆ ಇನ್ನೂ
ಹೊಳೆನರಸೀಪುರ ಸುದ್ದಿ : ೧ನೇ ವಾರ್ಡ್ ಶೋಭ (ಕಾಂಗ್ರೆಸ್), ೨ನೇವಾರ್ಡ್ ರಂಗನಾಥ (ಪಕ್ಷೇತರ), ೩ನೇವಾರ್ಡ್ ಜಿಕ್ರಿಯಾ ಅಹಮದ್ ಷರೀಫ್ (ಜೆಡಿಎಸ್), ೫ನೇವಾರ್ಡ್ ಪೈರೋಸ್ ಖಾನ್ (ಜೆಡಿಎಸ್), ೬ನೇವಾರ್ಡ್ ಮುಫಿದ್ ಅಲಿ (ಜೆಡಿಎಸ್), ೭ನೇವಾರ್ಡ್ ೬ನೇವಾರ್ಡ್ ಮುಫಿದ್ ಅಲಿ (ಜೆಡಿಎಸ್), ೮ನೇವಾರ್ಡ್ ಹೆಚ್.ಆರ್.ಕಲಾವತಿ (ಜೆಡಿಎಸ್), ೧೦ನೇವಾರ್ಡ್ ಎ.ಆರ್.ರವಿಕುಮಾರ (ಜೆಡಿಎಸ್), ೧೧ನೇವಾರ್ಡ್ ಸರಸ್ವತಿ (ಪಕ್ಷೇತರ), ೧೨ನೇವಾರ್ಡ್ ಕೆ.ಆರ್.ಸುಬ್ರಹ್ಮಣ್ಯ (ಜೆಡಿಎಸ್), ೧೩ನೇವಾರ್ಡ್ ಹೆಚ್.ಎಸ್.ಸ್ವಾಮಿ(ಜೆಡಿಎಸ್), ೧೪ನೇವಾರ್ಡ್ ಹೆಚ್.ಸಿ.ಬಸವರಾಜು (ಜೆಡಿಎಸ್), ೧೫ನೇವಾರ್ಡ್ ಎನ್.ಲಕ್ಷ್ಮೀ (ಜೆಡಿಎಸ್), ೧೬ನೇವಾರ್ಡ್ ತುಳಸಿ ಹೆಚ್.ಜೆ.ಕುಮಾರ (ಜೆಡಿಎಸ್), ೧೭ನೇವಾರ್ಡ್ ಹೆಚ್.ವಿ.ಪುಟ್ಟರಾಜು(ಜೆಡಿಎಸ್), ೧೮ನೇವಾರ್ಡ್ ಎ.ಶ್ರೀಧರ(ಜೆಡಿಎಸ್), ೧೯ನೇವಾರ್ಡ್ ಚೈತ್ರ ಯು.ಆರ್. (ಕಾಂಗ್ರೆಸ್), ೨೦ನೇವಾರ್ಡ್ ಕೆ.ಎಸ್. ಸುಮಿತ್ರದೇವಿ (ಕಾಂಗ್ರೆಸ್), ೨೧ನೇವಾರ್ಡ್ ಹೆಚ್.ಎನ್.ರಾಘವೇಂದ್ರ(ಕಾಂಗ್ರೆಸ್) ೨೨ನೇವಾರ್ಡ್ ಜಯಕಾಂತಮ್ಮ(ಕಾಂಗ್ರೆಸ್), ೨೩ನೇವಾರ್ಡ್ ಹೆಚ್.ಕೆ.ರಘುರಾಮ (ಜೆಡಿಎಸ್) ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ.
ಚನ್ನರಾಯಪಟ್ಟಣ ಸುದ್ದಿ : ೧ನೇ ವಾರ್ಡ್ ತಾರಾ (ಜೆಡಿಎಸ್), ೨ನೇವಾರ್ಡ್ ಭಾರತಿರಂಗಸ್ವಾಮಿ (ಜೆಡಿಎಸ್), ೩ನೇವಾರ್ಡ್ ಬಿ.ನಾಗರಾಜ್ (ಕಾಂಗ್ರೆಸ್), ೪ನೇವಾರ್ಡ್ ಸಿ.ಜಿ.ನಟರಾಜ (ಜೆಡಿಎಸ್), ೫ನೇವಾರ್ಡ್ ಸಿ.ಕೆ.ಗೋಪಾಲಕೃಷ್ಣ (ಜೆಡಿಎಸ್), ೬ನೇವಾರ್ಡ್ ಕಲ್ಪನಾಸುರೇಶ್ (ಜೆಡಿಎಸ್), ೭ನೇವಾರ್ಡ್ ಜಿ.ಗೀತಾ (ಜೆಡಿಎಸ್), ೮ನೇವಾರ್ಡ್ ಸಿ.ಎನ್.ಶಶಿಧರ (ಜೆಡಿಎಸ್), ೯ನೇವಾರ್ಡ್ ಪರಶುರಾಮ್(ಕಾಂಗ್ರೆಸ್), ೧೦ನೇವಾರ್ಡ್ ಕೆ.ಜೆ.ಸುರೇಶ್ (ಜೆಡಿಎಸ್), ೧೧ನೇವಾರ್ಡ್ ಹೆಚ್.ಎನ್.ನವೀನ್ (ಪಕ್ಷೇತರ), ೧೨ನೇವಾರ್ಡ್ ಹೆಚ್.ವಿ.ಪ್ರವೀಣ್‌ಕುಮಾರ್ (ಜೆಡಿಎಸ್), ೧೩ನೇವಾರ್ಡ್ ಶೋಭಾ (ಕಾಂಗ್ರೆಸ್), ೧೪ನೇವಾರ್ಡ್ ನಾಗರತ್ನ (ಪಕ್ಷೇತರ), ೧೫ನೇವಾರ್ಡ್ ಮಂಜುನಾಥ್ (ಕಾಂಗ್ರೆಸ್), ೧೬ನೇವಾರ್ಡ್ ಸರವಣಕುಮಾರ್ (ಕಾಂಗ್ರೆಸ್), ೧೭ನೇವಾರ್ಡ್ ಅನ್ಸರ್‌ಪಾಷ (ಕಾಂಗ್ರೆಸ್), ೧೮ನೇವಾರ್ಡ್ ಭಾಗ್ಯಮ್ಮ (ಪಕ್ಷೇತರ), ೧೯ನೇವಾರ್ಡ್ ಮಂಜುಳ (ಜೆಡಿಎಸ್), ೨೦ನೇವಾರ್ಡ್ ಅನ್ಸರ್‌ಬೇಗ್ (ಜೆಡಿಎಸ್), ೨೧ನೇವಾರ್ಡ್ ಸಿ.ಜಿ.ಮಂಜಣ್ಣ (ಜೆಡಿಎಸ್) ೨೨ನೇವಾರ್ಡ್ ಸುಧಾ (ಕಾಂಗ್ರೆಸ್), ೨೩ನೇವಾರ್ಡ್ ಸಿ.ಎಸ್.ಪ್ರಕಾಶ್ (ಕಾಂಗ್ರೆಸ್) ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ

Friday, March 8, 2013

Election Story


  • ಸುನೀಲ್ ಕುಂಭೇನಹಳ್ಳಿ 

ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಮುಕ್ತಾಯವಾಗಿ ಗೆಲ್ಲುವ ಕುದುರೆ ಯಾವುದು ಎಂಬ ಕುತೂಹಲ ಶುರುವಾಗಿದ್ದು, ಏನಾಗಹುದೆಂಬ ಕಾತರ ಎಲ್ಲವರನ್ನು ಕಾಡುತ್ತಿದೆ. ಆದರೆ ಅದೃಷ್ಟದ ಪೆಟ್ಟಿಗೆಗಳು ಮಾತ್ರ ಕೊಠಡಿಯಲ್ಲಿ ಭದ್ರವಾಗಿದೆ.
ಯಾರ ಅದೃಷ್ಟ ಯಾವ ಪೆಟ್ಟಿಗೆಯಲ್ಲಿದೆ ? ಯಾರಿಗೆ ಎಷ್ಟು ಮತ ಬಿದ್ದಿದೆ ? ಯಾವ ವಾರ್ಡ್‌ನಿಂದ, ಯಾವ ಪಕ್ಷಕ್ಕೆ ಹಾಗೂ ವ್ಯಕ್ತಿಗೆ ಅನುಕೂಲಕರ ವಾತಾವರಣ ಇತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಈ ಬಾರಿಯ ಚುನಾವಣೆಯಲ್ಲಿ ಬಹಳ ಕಷ್ಟವಾಗಿದೆ.

ಹಿಂದೆಲ್ಲ ಚುನಾವಣೆ ಮುಗಿದ ನಾಲ್ಕು ಅಥವಾ ಐದು ದಿನಕ್ಕೆ ಫಲಿತಾಂಶ ಹೊರಬರುತ್ತಿತ್ತು. ಅದೇ ರೀತಿ ಈ ಸ್ಥಳೀಯ ಚುನಾವಣೆಯಲ್ಲಿಯೂ ಕುತೂಹಲಕ್ಕೆ ಅವಕಾಶವಿಲ್ಲ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಹಂತದ ಮತದಾನವಾಗಿದ್ದರಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸುಮಾರು ಹದಿನೈದು ದಿನ ಮತ ಎಣಿಕೆಗಾಗಿ ಕಾಯ್ದಿದ್ದರು. ಆದರೆ ಈ ಸ್ಥಳೀಯ ಸಂಸ್ಥೆಯ ಚುನಾವಣೆ ರಾಜ್ಯಾದ್ಯಂತ ಒಮ್ಮೆಲೆ ನಡೆದಿದ್ದರಿಂದ ಕುತೂಹಲಕ್ಕೆ ಕಾಲವಕಾಶ ಕಡಿಮೆ ಇದ್ದು, ಮೇ.೧೧ ರ ೧೧ಗಂಟೆಗೆ ಮತದಾರರ ತೀರ್ಪು ಪ್ರಕಟವಾಗುತ್ತದೆ. ಅದೃಷ್ಟ ಯಾರತ್ತ ಹೋಗುತ್ತದೆ ಎನ್ನುವುದು ಅಂದೇ ತಿಳಿಯುತ್ತದೆ.

ಹಾಸನ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ ೭೭.೨೮ರಷ್ಟು ಮತದಾನವಾಗಿದ್ದು, ಚುನಾವಣೆಯಾದ ವಿದ್ಯುತ್ ಮತಯಂತ್ರಗಳನ್ನು ಹಾಸನದ ಸರ್ಕಾರಿ ಮಹಿಳಾ ಕಲಾ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಭದ್ರವಾಗಿ ಇಡಲಾಗಿದೆ. ಇಲ್ಲಿ ಕೆಲವು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೆ ಬಿಡಾರ ಹೂಡಿದ್ದಾರೆ. ಮತ ಪೆಟ್ಟಿಗೆ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ೧೧ರವರೆಗೆ ಕಾಯುತ್ತಿದ್ದರೆ ರಾಜಕೀಯ ಖಂಡರುಗಳು, ಕಾರ್ಯರ್ತರು, ಮತದಾರರು ಅದರಿಂದ ಹೊರಬೀಳುವ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಹಿಂದಿನ ಚುನಾವಣೆಗಳಂತೆ ಈ ಬಾರಿ ಫಲಿತಾಂಶದ ಅವಧಿ ಕಡಿಮೆಯಾಗಿದ್ದರಿಂದ ಎಲ್ಲರಲ್ಲೂ ಉತ್ಸಾಹವಿದ್ದು, ಆದರೂ ನೆನ್ನೆ ಹಾಸನ, ಚನ್ನರಾಯಪಟ್ಟಣ, ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆರಾಯ ತುಂತುರು ಮಳೆ ಭುವಿಗೆ ಬಿದ್ದ ಕಾರಣ ಮತದಾರಿಗೆ ಮುಂದೇನು ಎನ್ನುವ ಯೋಜನೆಯಿಲ್ಲ. ಈಗ ಏನಿದ್ದರೂ ಈಗ ಏನಿದ್ದರೂ ಹೊಲದ ಕೆಲಸ, ಮನೆಯ ಕೆಲಸ, ಮಳೆ ಬಂದರೆ ಜಮೀನಿನಲ್ಲಿ ಬಿತ್ತನೆ ಮಾಡುವತ್ತ ಆಸಕ್ತಿ ತೋರಿದ್ದಾರೆ.

ಯಾರೇ ಗೆಲ್ಲಲಿ, ಸೋಲಲಿ ಬೇರೆಯವರಿಗೇನೂ ಉಪಯೋಗವಿಲ್ಲ. ಗೆದ್ದವರು ತಮ್ಮ ಅನುಕೂಲ ನೋಡಿಕೊಳ್ಳುವರು. ಸೋತವರು ಮನೆಯಲ್ಲಿ ನೆಮ್ಮದಿಯಾಗಿರುವರು. ಆದರೆ ಈ ನಡುವೆ ಓಡಾಡಿಕೊಂಡಿದ್ದವರು ಮಾತ್ರ ಅಬ್ಬೇಪಾರಿಗಳಾಗಿ ನೆಲೆ ಕಳೆದುಕೊಂಡು ಮತ್ತೆ ಹೊಸ ಉದ್ಯೂಗ ಹುಡುಕುವ ಕಾಯಕದಲ್ಲಿದ್ದಾರೆ.

ಅಭ್ಯರ್ಥಿಗಳ ಸೋಲು ಗೆಲುವು ಬೇರೆ ಪ್ರಶ್ನೆ. ಗೆದ್ದರೆ ಎಲ್ಲರ ಆದ್ಯತೆ ಹತ್ತೆಂಟು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಭರವಸೆ ಚುನಾವಣೆಗೆ ಮುಗಿಯಿತು. ಈಗೇನು ಎಂಬುದು ಸ್ಪಷ್ಟವಿಲ್ಲ. ಆದರೆ ಫಲಿತಾಂಶ ಹೊರಬೀಳುವವರೆಗೆ ಎಲ್ಲರನ್ನೂ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಕೆಲವರಿಗೆ ಪಕ್ಷದ ಸಂಘಟನೆ ಮುಖ್ಯವಾದರೆ ಮತ್ತೆ ಕೆಲವರಿಗೆ ಜನರ ಸಮಸ್ಯೆ ಪರಿಹಾರಕ್ಕೆ ಓಡಾಡುವತ್ತ ಆದ್ಯತೆ. ಆದರೆ ಇವೆಲ್ಲವೂ ಫಲಿತಾಂಶದ ನಂತರವೂ ಮುಂದುವರೆಯುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.



Sunday, September 18, 2011


Monday, May 2, 2011

ಪತ್ರಿಕೋದ್ಯಮ, ಹಳಗನ್ನಡ ಡಿಪ್ಲೊಮಾ ಶೀಘ್ರ ಆರಂಭ


ಚನ್ನರಾಯಪಟ್ಟಣ: ‘ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ     ರಂಗಭೂಮಿ, ಪತ್ರಿಕೋದ್ಯಮ ಹಾಗೂ ಹಳಗನ್ನಡ  ವಿಷಯಗಳ ಬಗ್ಗೆ ಡಿಪ್ಲೊಮಾ ಕೋರ್ಸ್ ಆರಂಭಿಸಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ತಿಳಿಸಿದರು.

ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮೂರು ವಿಷಯಗಳಲ್ಲಿ ದೂರ ಶಿಕ್ಷಣ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆಯಲಾಗಿದೆ. ಜೂನ್‌ನಿಂದ  ಕೋರ್ಸ್ ಪ್ರಾರಂಭಿಸಲಾಗುವುದು. ಪಠ್ಯಕ್ರಮ ರೂಪಿಸಲು ಸಮಿತಿ ನೇಮಿಸಲಾಗಿದ್ದು, ಅಂತಿಮ ಹಂತದಲ್ಲಿದೆ’ ಎಂದರು.

‘ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಗಿನಿಂದ ಈವರೆಗಿನ ಕಾರ್ಯ ವೈಖರಿಯ ವಿವರಗಳನ್ನು ನೀಡುವಂಥ ಸಾಕ್ಷ್ಯಚಿತ್ರವೊಂದನ್ನು  ತಯಾರಿಸಲು ಉದ್ದೇಶಿಸಲಾಗಿದೆ. ಕರ್ನಾಟಕ ಏಕೀಕರಣ, ಗೋಕಾಕ್ ಚಳವಳಿಯಲ್ಲಿ ಕ.ಸಾ.ಪ. ಪಾತ್ರ, ಇದುವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ಬಗ್ಗೆ ಮಾಹಿತಿ, ಕ.ಸಾ.ಪ. ಚುನಾವಣೆ, ರಾಜ್ಯ, ಜಿಲ್ಲಾ, ತಾಲ್ಲೂಕು ಸಮ್ಮೇಳನವನ್ನು ಆರಂಭಿಸಿದ ವರ್ಷ, ಇತ್ಯಾದಿ ಘಟನೆಯನ್ನು ಅದರಲ್ಲಿ ದಾಖಲಿಸಲಾಗುವುದು. ಸುಮಾರು 20 ಗಂಟೆ ಅವಧಿಯ ಸಾಕ್ಷ್ಯಚಿತ್ರ ತಯಾರಿಸಿ ಕ.ಸಾ.ಪ.ದಲ್ಲಿ ಸಂಗ್ರಹಿಸಿಡಲಾಗುವುದು. ಅದನ್ನು ಸಂಕ್ಷಿಪ್ತವಾಗಿ ತಿಳಿಸುವ ಹಿನ್ನಲೆಯಲ್ಲಿ ಮುಖ್ಯಾಂಶಗಳನ್ನೊಳಗೊಂಡ ತಲಾ 1 ಗಂಟೆ 20 ನಿಮಿಷದ 2 ಸಿ.ಡಿ.ಯನ್ನು ತಯಾರಿಸಲಾಗುವುದು. 3 ತಿಂಗಳೊಳಗೆ ಸಾಕ್ಷ್ಯಚಿತ್ರ ಸಿದ್ಧವಾಗಲಿದೆ’ ಎಂದು ತಿಳಿಸಿದರು.

‘ಪರಿಷತ್ತಿನಿಂದ ಶೀಘ್ರದಲ್ಲೇ ದಕ್ಷಿಣ ದ್ರಾವಿಡ ಜ್ಞಾತಿ ಪದಕೋಶವನ್ನು ಹೊರತರಲಾಗುವುದು. ಇದರಲ್ಲಿ ಕನ್ನಡ, ತಮಿಳು, ತೆಲುಗು, ತುಳು, ಮಲೆಯಾಳಂ ಭಾಷೆಯ ಪದಪುಂಜಗಳನ್ನು ಸೇರಿಸಲಾಗುವುದು. ಈ ಭಾಷೆಯಲ್ಲಿ ಬಳಕೆಯಲ್ಲಿರುವ ಪದಗಳ ಅನುವಾದ  ಕಾರ್ಯ  ನಡೆಯಲಿದೆ. ದ್ರಾವಿಡ ಭಾಷೆಯ ಪರಸ್ಪರ ಸಂಬಂಧಗಳನ್ನು ತಿಳಿಸಿಕೊಡುವುದು ಇದರ ಉದ್ದೇಶ’ ಎಂದರು.

ದೇಶದ್ರೋಹಿ ವಿನಯ್ ನ ಅಂತರಂಗ-ಬಹಿರಂಗ!


ಅರಕಲಗೂಡು: ಕನ್ನಡದ ಹೆಸರಾಂತ ಕಾದಂಬರಿಕಾರ ಅನಕೃ ಹೆಸರಿನಿಂದಾಗಿ ಗುರುತಿಸಲ್ಪಡುತ್ತಿದ್ದ ಅರಕಲಗೂಡು ಇದೀಗ ಉಗ್ರಗಾಮಿ ಚಟುವಟಿಕೆಗೆ ಸಹಕರಿಸಿ ದೇಶದ್ರೋಹಿ ಚಟುವಟಿಕೆ ನಡೆಸುಯತ್ತಿದ್ದ ವಿನಯ್ ಕುಮಾರ್ ಬಂಧನದಿಂದಾಗಿ ರಾಷ್ಟಾಧ್ಯಂತ ಮತ್ತೊಮ್ಮೆ ಗಮನ ಸೆಳೆದಿರುವುದು ದುರಂತದ ಸಂಗತಿ.

ಅರಕಲಗೂಡು ತಾಲೂಕಿನ ರಾಮನಾಥಪುರ ಕೊಡಗು ಗಡಿಯಂಚಿನಲ್ಲಿದ್ದು ಜಿಲ್ಲಾ ಕೇಂದ್ರದಿಂದ 50ಕಿಮಿ ಹಾಗೂ ತಾಲ್ಲೂಕು ಕೇಂದ್ರದಿಂದ 20ಕಿಮಿ ದೂರದಲ್ಲಿದೆ. ರಾಷ್ಟಕೂಟರು-ಹೊಯ್ಸಳರ ಶೈಲಿಯ ಶಿಲ್ಪ ಕಲೆಯ ದೇಗುಲಗಳ ಸಮುಚ್ಚಯ ಹಾಗೂ ಕಾವೇರಿ ಹೊಳೆ ಇಲ್ಲಿ ಹರಿಯುವುದರಿಂದ ಇದು ಪ್ರಮುಖ ಧಾರ್ಮಿಕ ಕ್ಷೇತ್ರವೂ ಹೌದು. ಅಡಿಕೆ-ಭತ್ತ-ತಂಬಾಕು ಬೆಳೆಯುವ ಮೂಲಕ ಅತ್ಯಂತ ಸಮೃದ್ದಿ ಹಾಗೂ ಸಿರಿತನವೂ ಇಲ್ಲಿದೆಯಾದರೂ ಗ್ರಾಮೀಣ ಪ್ರದೇಶವಾದ ಇಲ್ಲಿ ಆಧುನಿಕತೆಯ ಸೋಂಕು ಇಲ್ಲ .ಇಂತಹ ರಾಮನಾಥಪುರಕ್ಕೆ ವಿನಯ್ ಅಲಿಯಾಸ್ ವಿನಯಕುಮಾರ್(30) ಕುಟುಂಬ ಕಳೆದ 15-20ವರ್ಷಗಳ ಹಿಂದೆ ಕೊಡಗಿನಿಂದ ವಲಸೆ ಬಂದು ಗ್ರಾಮದಲ್ಲಿ ನೆಲೆಸಿತ್ತು. ತಂದೆ ಇಲ್ಲದ ವಿನಯ್ ತನ್ನ ತಾಯಿ ಮಡಿಕೆರಿಯಮ್ಮ ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದ. ತಾರುಣ್ಯದ ಆರಂಭದಲ್ಲಿ ಶ್ರಮವಿಲ್ಲದೇ ದುಡ್ಡು ಸಂಪಾದಿಸುವ ಹಪಾಹಪಿಗೆ ಬಿದ್ದ ಈತ ರೈಸ್ ಪುಲ್ಲಿಂಗ್, 20ಕಾಲುಗಳ ಆಮೆ, 2ತಲೆ ಬಿಳಿ ಹಾವು ಇತ್ಯಾಧಿಗಳ ಬೆನ್ನು ಹತ್ತಿ ತಮಿಳುನಾಡು ,ಕೇರಳ ಹಾಗೂ ಆಂಧ್ರಪ್ರದೇಶಗಳಿಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ನಂತರ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರು ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಲೈವ್ ಬ್ಯಾಂಡ್ ನಲ್ಲೂ ಕೆಲ ಕಾಲ ಭೌನ್ಸ್ರರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಈ ಮದ್ಯೆ ಈತನ ಸಹೋದರಿಯರ ಮದುವೆಯಾಗಿದ್ದು, ತಾಯಿ ಸುಬ್ರಹ್ಮಣ್ಯೇಶ್ವರ ಧೇಗುಲದೆದರುರು ಹೂವು-ಹಣ್ಣು ಮಾರಾಟ ಮಾಡಿ ಜೀವನ ಸಾಕುತ್ತಾರೆ. ಆದರೆ ವಿನಯ್ ಶ್ರೀಮಂತಿಕೆ ಮತ್ತು ಸುಖದ ಜೀವನದ ಹಂಬಲಕ್ಕೆ ಬಿದ್ದು ಅಪಹರಣ, ವಂಚನೆಯಂತಹ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಮತ್ತು ಹಾಸನದ ಪೋಲೀಸ್ ಪೇದೆಯೊಬ್ಬರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಈತನ ಅಸಲಿಯತ್ತು ತಿಳಿದ ಮೇಲೆ ಆಕೆ 2ವರ್ಷಗಳ ಹಿಂದೆ ಈತನನ್ನು ತೊರೆದಿದ್ದಾಳೆ. ಒಂದೂವರೆವರ್ಷಗಳ ಹಿಂದೆ ಮಂಗಳೂರಿನಲ್ಲಿದ್ದ ಕೇರಳ ಮೂಲಕ ಉದ್ಯಮಿಯೊಬ್ಬರನ್ನು ತನ್ನ ತಂಡದೊಂದಿಗೆ ಅಪಹರಿಸಿ ರಾಮನಾಥಪುರದ ತನ್ನ ಮನೆಯಲ್ಲಿ ಕೂಡಿಹಾಕಿ ಒತ್ತೆ ಹಣಕ್ಕೆ ಬೆದರಿಕೆ ಇಟ್ಟಿದ್ದ, ಮೂರು ತಿಂಗಳ ನಂತರ ಕೇರಳ-ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒತ್ತೆ ಬಿಡಿಸಿ ವಿನಯ್ ನನ್ನು ಜೈಲಿಗಟ್ಟಿದ್ದರು. ಜೈಲಿನಿಂದ ಹಿಂತಿರುಗಿದ ಈತ ಹಳ್ಳಿಯಲ್ಲಿ ಜನರ ವಿಶ್ವಾಸ ಬೆಳೆಸಿ ಹಲವು ಚೀಟಿಗಳನ್ನು ಹಾಕಿದ್ದ ಮತ್ತು ಬೇರೆ ಬೇರೆ ಮಾದರಿಯ ಕಾರುಗಳನ್ನು ತಂದು ಶೋಕಿ ಜೀವನ ನಡೆಸುತ್ತಿದ್ದ. ಗ್ರಾಮದಲ್ಲಿ ಸಭ್ಯನಂತೆ ಬದುಕುತಿದ್ದ ಈತನನ್ನು ಬೆಂಗಳೂರಿನ ಪೋಲೀಸರು ಕಳೆದ ಬುಧವಾರವೇ ಬಂಧಿಸಿ ಕರೆದೊಯ್ದಿದ್ದರು. ಇದೀಗ ವಿನಯನ ದೇಶದ್ರೋಹಿ ಪಾತಕಗಳು ಬಯಲಾಗಿದ್ದು ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಆತನ ಮನೆಯಿಂದಲೂ ಪೋಲೀಸರು ಹಲವು ಮುಖ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ , ಆತನ ಮನೆಗೀಗ ಬೀಗ ಜಡಿಯಲಾಗಿದೆ ಆತನ ತಾಯಿ ಹಾಗೂ ಸಂಬಂಧಿಕರು ಸಂಪರ್ಕ ಸದ್ಯಕ್ಕೆ ಲಭ್ಯವಾಗಲಿಲ್ಲ.
ಅರಕಲಗೂಡು: ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ಸಹಿಸದೇ ಮಾಜಿ ಶಾಸಕ ಎ ಟಿ ರಾಮಸ್ತಾಮಿ ವೈಯುಕ್ತಿಕ ಹಿತಾಸಕ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ಕುರಿತು ದೂರುನೀಡುವ ಮೂಲಕ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ. ಕತ್ತಿಮಲ್ಲೇನಹಳ್ಲಿ ಏತ ನೀರಾವರಿ ಬಳಿಯ ಛಾನೆಲ್ ಗೆ ನೀರು ಹರಿಸುವ ಹಾಗೂ ಭಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು, ನಿನ್ನೆ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಪರಿಶೀಲಿಸಿರುವುದು ಗಮನಕ್ಕೆ ಬಂದಿದೆ, ತಪ್ಪು ಕಂಡು ಬಂದರೆ ಕ್ರಮ ಜರುಗಿಸಲಿ ಅದಕ್ಕೆ ತಮ್ಮ ಅಭ್ಯಂತರವಿಲ್ಲ ಆದರೆ ಯೋಜನೆ ಅನುಷ್ಠಾನದಲ್ಲಿ ಆಗಿರುವ ಸಣ್ಣಪುಟ್ಟ ಲೋಪದೋಷಗಳನ್ನು ದೊಡ್ಡದೆಂದು ಬಿಂಬಿಸಿ ಅಭಿವೃದ್ದಿಗೆ ಅಡ್ಡಿಪಡಿಸುವ ಕ್ರಿಯೆಯನ್ನು ತಾವು ಸಹಿಸುವುದಿಲ್ಲ ಎಂದರು. ಕೂಲಿ ಕಾರರ ಹಣ ಶೀಘ್ರವಾಗಿ ಬಿಡುಗಡೆ ಆಗಬೇಕು ಆದರೆ ಸರಕು-ಸಾಮಾಗ್ರಿ ವೆಚ್ಚದ ಬಗ್ಗೆ ತಕರಾರು ತೆಗೆದಿರುವುದು ಸರಿಯಲ್ಲ ಸಾಮಾಗ್ರಿ ವೆಚ್ಚ ಬಿಡುಗಡೆಯಾಗದೇ ಕೆಲಸ ಮಾಡುವುದಾದರೂ ಹೇಗೆ ಎಂದರು. ಮಾಜಿ ಶಾಸಕರು ಅವರ ಅಧಿಕಾರಾವಧಿಯಲ್ಲಿ ಅವರ ೂರಿನಲ್ಲೆ ಎಷ್ಟರ ಮಟ್ಟಿಗೆ ಕಾಮಗಾರಿ ಮಾಡಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ರಾಮನಾಥಪುರದಲ್ಲಿ ಪಟ್ಟಾಭಿರಾಮ ಪ್ರೌಡಶಾಲೆಯ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಿ ಬಿಲ್ ಮಾಡಲಾಗಿದೆ ಇದನ್ನೇಕೆ ಮಾಜಿ ಶಾಸಕರು ದೂರಲಿಲ್ಲ ಎಂದು ಪ್ರಶ್ನಿಸಿದ ಅವರು ಮಾಜಿ ಶಾಸಕರು ಒತ್ತುವರಿ ಸಮಿತಿ ಅಧ್ಯಕ್ಷರಾಗಿದ್ದವರು ತಾಲೂಕಿನಲ್ಲಿ ಅವರು ಮತ್ತು ಅ ವರ ಶಿಷ್ಯರು ಎಷ್ಟು ಪ್ರಮಾಣದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ , ಅದನ್ನು ತೆರವುಗೊಳಿಸಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಿ ಅದನ್ನು ಬಿಟ್ಟು ಅಭಿವೃದ್ದಿ ಸಹಿಸದೇ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಪತ್ರ ಬರೆದಿದ್ದಾರೆ ಎಂದು ಲೇವಡಿ ಮಾಡಿದರು. .