Monday, March 11, 2013

ಹಾಸನ ನಗರಸಭೆ ಚುನಾವಣೆ-2013


ಹಾಸನ ಸುದ್ದಿ : ೦೧
ಅಂತೂ ಎಲ್ಲಾರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸ್ಥಂಸ್ಥೆಗಳ ಚುನಾವಣೆಯು ಮುಗಿದಿದ್ದು, ಜಿಲ್ಲೆಯ ೫ ಪುರಸಭೆ, ೨ ಪಟ್ಟಣ ಪಂಚಾಯ್ತಿ ಮತ್ತು ೧ ನಗರ ಸಭೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

೮ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು ಹಾಗೂ ಸಕಲೇಶಪುರ ಪುರಸಭೆ ಹಾಗೂ ಹಾಸನ ನಗರಸಭೆ ಸೇರಿದಂತೆ ೫ ಸ್ಥಾನವನ್ನು ಜೆಡಿಎಸ್ ಪಾಲಾದರೆ, ಆಲೂರು ಪ.ಪಂಚಾಯ್ತಿ ಕೆಜೆಪಿ ಪಾಲಾಗಿದೆ. ಉಳಿದಂತೆ ಅರಸೀಕರೆ ಪುರಸಭೆ ತಲಾ ಕಾಂಗ್ರೆಸ್ ಹಾಗೂ ಜೆಡಿಸ್ ೧೧-೧೧ ಸ್ಥಾನಗಳನ್ನು ಹಾಗೂ ೧ ಪಕ್ಷೇತ್‌ಹಾಗೂ ಅರಕಲಗೂಡು ಪುರಸಭೆಗಳು ಅಂತಂತ್ರ ಸ್ಥಿತಿ ನಿರ್ಮಾಣ ವಾಗಿದ್ದು, ಇದೇ ರೀತಿ ಅರಕಲಗೂಡು ಪ.ಪಂ.ಯಲ್ಲಿ ಕಾಂಗ್ರೆಸ್ ೭ಸ್ಥಾನವನ್ನು ಗಳಿಸಿದರೆ, ೫ ಸ್ಥಾನವನ್ನು ಜೆಡಿಎಸ್ ಗಳಿದ್ದು, ಉಳಿದ ೩ ಸ್ಥಾನಗಳು ಪಕ್ಷೇತರರ ಪಾಲಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಹಾಸನ ನಗರಸಭೆಯ ೩೫ವಾರ್ಡ್‌ಗಳಲ್ಲಿ ೧೯ ಸ್ಥಾನವನ್ನು ಜೆಡಿಎಸ್ ಪಡೆದಕೊಂಡು ಈಬಾರಿಯೂ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿದಕೊಂಡಿದೆ. ಉಳಿದಂತೆ ೯ ಸ್ಥಾನವನ್ನು ಕಾಂಗ್ರೆಸ್, ೧ ಸ್ಥಾನವನ್ನು ಬಿಜೆಪಿ ಪಡೆದರೆ ಕೆಜೆಪಿಯೂ ಕೂಡಾ ಒಂದು ಸ್ಥಾನವನ್ನು ಪಡೆದು ತನ್ನ ಖಾತೆಯನ್ನು ತೆರೆದಿದ್ದು, ಉಳಿದ ೫ ವಾರ್ಡ್‌ಗಳು ಪಕ್ಷೇತರರ ಪಾಲಾಗಿದೆ. 
ಹಾಗೇ ಚನ್ನರಾಯಪಟ್ಟಣದಲ್ಲಿಯೂ ಕೂಡಾ ಜೆಡಿಎಸ್(೧೨), ಕಾಂಗ್ರೇಸ್(೮) ಪಕ್ಷೇತರ(೧) ಬಂಡಾಯ ಕಾಂಗ್ರೇಸ್(೨) ಸ್ಥಾನಗಳಿಸಿದೆ.
ಹೊಳೆನರಸೀಪುರದಲ್ಲಿ ಒಟ್ಟು ಜೆಡಿಎಸ್ (೧೬), ಕಾಂಗ್ರೆಸ್ (೫) ಪಕ್ಷೇತರ(೨) ಸ್ಥಾನಗಳನ್ನು ಪಡೆದಿವೆ. ಆದರೆ ಚುನಾವಣೆಯಲ್ಲಿ ಜೆಡಿಎಸ್ ೧೪ ಸ್ಥಾನಗಳನ್ನು ಪಡೆದಿದ್ದು, ಉಳಿದ ೨ಸ್ಥಾನಗಳು ಚುನಾವಣೆಗೂ ಮುನ್ನವೇ ಅವಿರೋಧವಾಗಿ ಆಯ್ಕೆಯಾಗಿದ್ದರು. 
ಹಾಗೂ ಸಕಲೇಶಪುರದಲ್ಲಿ ಈಬಾರಿ ೧೧ ಸ್ಥಾನವನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ ೬ಸ್ಥಾನಗಳನ್ನು ಪಡೆದು ಕಾಂಗ್ರೆಸ್ ನಂತರದ ಸ್ಥಾನದಲ್ಲಿದ್ದೆ. ಜೊತೆಗೆ ಬಿಜೆಪಿ-೨, ಕೆಜೆಪಿ-೨, ಹಾಗೂ ಪಕ್ಷೇತರರರು ೨ಸ್ಥಾನವನ್ನು ಪಡೆದಿದ್ದಾರೆ. 
ಉಳಿದ ಬೇಲೂರು ಪುರಸಭೆಯಲ್ಲಿ ೧೨ಸ್ಥಾನವನ್ನು ಜೆಡಿಎಸ್, ೯ಸ್ಥಾನವನ್ನು ಕಾಂಗ್ರೆಸ್ ಹಾಗೂ ೨ಸ್ಥಾನಗಳು ಪಕ್ಷೇತರರ ಪಾಲಾಗಿದ್ದು,  ಜೆಡಿಎಸ್ ಮತ್ತೊಮ್ಮೆ ಪುರಸಭೆಯ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿದಕೊಂಡಿದ್ದು, ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಹಾಸನ ಜಿಲ್ಲೆ ಮತ್ತೆ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಗದ್ದುಗೆಯನ್ನೇರುವುದರ ಮೂಲಕ ಮತ್ತೆ ತನ್ನ ಪಾರುಪತ್ಯವನ್ನು ಮೆರೆಯಲಿದೆ.  

ಹಾಸನ ಸುದ್ದಿ : ೦೨
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿದ ಅಭ್ಯರ್ಥಿಗಳ ವಿವರಗಳು ಇಂತಿದೆ. 
ಹಾಸಸನ ನಗರಸಭೆ: 
೧ನೇ ವಾರ್ಡ್ ಸಿ.ಎಂ. ಭಾನು ಪ್ರಕಾಶ್ (ಜೆಡಿಎಸ್), ೨ನೇ ವಾರ್ಡ್-ಶೋಭಾ ಗಣೇಶ್(ಕಾಂಗ್ರೆಸ್), ೩ನೇವಾರ್ಡ್-ಸುರೇಶ್‌ಕುಮಾರ್(ಪಕ್ಷೇತರ ಅಭ್ಯರ್ಥಿ), ೪ನೇ ವಾರ್ಡ್-ಲೀಲಾವತಿ ವಾಸು (ಜೆ.ಡಿ.ಸ್), ೫ನೇವಾರ್ಡ್-ಆರ್.ಅಂಬಿಕಾ ರವಿಶಂಕರ್ (ಜೆಡಿಎಸ್),೬ನೇವಾರ್ಡ್-ಪ್ರಸನ್ನಕೃಷ್ಣಮೂರ್ತಿ(ಜೆ.ಡಿ.ಸ್),೭ನೇವಾರ್ಡ್-ಎಂ.ಎ.ಇಂದುಮತಿ(ಕಾಂಗ್ರೆಸ್),೮ನೇವಾರ್ಡ್-ನೇತ್ರಾವತಿ ಗಿರೀಶ್ (ಜೆಡಿಎಸ್), ೯ನೇವಾರ್ಡ್-ಡಾ: ಹೆಚ್.ಎಸ್.ಅನಿಲ್ (ಜೆಡಿಎಸ್), ೧೦ನೇವಾರ್ಡ್-ಹೆಚ್.ಎಂ.ಯಶವಂತ್(ಕಾಂಗ್ರೆಸ್), ೧೧ನೇವಾರ್ಡ್-ಕುಮಾರ್(ಕಾಂಗ್ರೆಸ್), ೧೨ನೇವಾರ್ಡ್ ಹೆಚ್.ಎಸ್. ಪ್ರಸನ್ನ ಕುಮಾರ್(ಪಕ್ಷೇತರ), ೧೩ನೇವಾರ್ಡ್-ಪಾರ್ವತಿ(ಪಕ್ಷೇತರ), ೧೪ನೇವಾರ್ಡ್- ಬಿ.ಎಸ್. ಉಷಾ (ಕೆ.ಜೆ.ಪಿ.), ೧೫ನೇವಾರ್ಡ್- ಮಹೇಶ್ ಕೆ.ಆರ್. (ಜೆಡಿಎಸ್), ೧೬ನೇವಾರ್ಡ್- ಹೆಚ್.ಎಲ್. ವಿಜಯಕುಮಾರ್ (ಜೆಡಿಎಸ್), ೧೭ನೇವಾರ್ಡ್- ಅಜಾಜ್ ಪಾಷಾ(ಜೆ.ಡಿ.ಸ್), ೧೮ನೇವಾರ್ಡ್-ಆರೀಫ್ ಖಾನ್(ಕಾಂಗ್ರೆಸ್), ೧೯ನೇವಾರ್ಡ್-ಜಿ.ಆರ್.ರಮೇಶ್(ಬಿ.ಜೆ.ಪಿ.), ೨೦ನೇವಾರ್ಡ್-ಅಮೀರ್ ಜಾನ್(ಪಕ್ಷೇತರ), ೨೧ನೇವಾರ್ಡ್-ಇಶ್ರಾದ್ ಪಾಷಾ (ಜೆಡಿಎಸ್), ೨೨ನೇವಾರ್ಡ್- ಅಬ್ದುಲ್ ಕಯುಮ್ (ಕಾಂಗ್ರೆಸ್), ೨೩ನೇವಾರ್ಡ್-ಶಾರದಮ್ಮ (ಜೆಡಿಎಸ್), ೨೪ನೇವಾರ್ಡ್- ಹೆಚ್.ಆರ್.ಪ್ರಸನ್ನ ಕುಮಾರ್(ಅಪ್ಪು), (ಜೆಡಿಎಸ್), ೨೫ನೇವಾರ್ಡ್- ಹೆಚ್.ಬಿ. ಗೋಪಾಲ (ಜೆಡಿಎಸ್), ೨೬ನೇವಾರ್ಡ್- ಟಿ. ನಿರ್ಮಲ ಯೋಗೀಶ್ (ಜೆಡಿಎಸ್), ೨೭ನೇವಾರ್ಡ್-ಸೀತಮ್ಮ (ಜೆಡಿಎಸ್), ೨೮ನೇವಾರ್ಡ್-ಸಯ್ಯದ್ ತಲಹ (ಕಾಂಗ್ರೆಸ್), ೨೯ನೇವಾರ್ಡ್-ಎಂ.ಕೆ. ರಾಜೇಶ್(ಬಾಬಿ), (ಕಾಂಗ್ರೆಸ್), ೩೦ನೇವಾರ್ಡ್-ಸಿ. ಶುಭ (ಜೆಡಿಎಸ್), ೩೧ನೇವಾರ್ಡ್- ಹೆಚ್.ಹೆಚ್. ಶ್ರೀವಿದ್ಯಾ, (ಜೆಡಿಎಸ್), ೩೨ನೇವಾರ್ಡ್- ಹೆಚ್.ಎಸ್. ಶಂಕರ್ (ಜೆಡಿಎಸ್), ೩೩ನೇವಾರ್ಡ್-ಸಮೀರ್ ಮೊಹಿದ್ದೀನ್ (ಪಕ್ಷೇತರ), ೩೪ನೇವಾರ್ಡ್-ಸಿ.ಟಿ.ಕುಮಾರ(ಕಾಂಗ್ರೆಸ್), ೩೫ನೇವಾರ್ಡ್- ಹೇಮಾವತಿ (ಜೆಡಿಎಸ್) ಜಯಗಳಿಸಿದ್ದಾರೆ.