Monday, May 2, 2011

ಪತ್ರಿಕೋದ್ಯಮ, ಹಳಗನ್ನಡ ಡಿಪ್ಲೊಮಾ ಶೀಘ್ರ ಆರಂಭ


ಚನ್ನರಾಯಪಟ್ಟಣ: ‘ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ     ರಂಗಭೂಮಿ, ಪತ್ರಿಕೋದ್ಯಮ ಹಾಗೂ ಹಳಗನ್ನಡ  ವಿಷಯಗಳ ಬಗ್ಗೆ ಡಿಪ್ಲೊಮಾ ಕೋರ್ಸ್ ಆರಂಭಿಸಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ತಿಳಿಸಿದರು.

ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮೂರು ವಿಷಯಗಳಲ್ಲಿ ದೂರ ಶಿಕ್ಷಣ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆಯಲಾಗಿದೆ. ಜೂನ್‌ನಿಂದ  ಕೋರ್ಸ್ ಪ್ರಾರಂಭಿಸಲಾಗುವುದು. ಪಠ್ಯಕ್ರಮ ರೂಪಿಸಲು ಸಮಿತಿ ನೇಮಿಸಲಾಗಿದ್ದು, ಅಂತಿಮ ಹಂತದಲ್ಲಿದೆ’ ಎಂದರು.

‘ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಗಿನಿಂದ ಈವರೆಗಿನ ಕಾರ್ಯ ವೈಖರಿಯ ವಿವರಗಳನ್ನು ನೀಡುವಂಥ ಸಾಕ್ಷ್ಯಚಿತ್ರವೊಂದನ್ನು  ತಯಾರಿಸಲು ಉದ್ದೇಶಿಸಲಾಗಿದೆ. ಕರ್ನಾಟಕ ಏಕೀಕರಣ, ಗೋಕಾಕ್ ಚಳವಳಿಯಲ್ಲಿ ಕ.ಸಾ.ಪ. ಪಾತ್ರ, ಇದುವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ಬಗ್ಗೆ ಮಾಹಿತಿ, ಕ.ಸಾ.ಪ. ಚುನಾವಣೆ, ರಾಜ್ಯ, ಜಿಲ್ಲಾ, ತಾಲ್ಲೂಕು ಸಮ್ಮೇಳನವನ್ನು ಆರಂಭಿಸಿದ ವರ್ಷ, ಇತ್ಯಾದಿ ಘಟನೆಯನ್ನು ಅದರಲ್ಲಿ ದಾಖಲಿಸಲಾಗುವುದು. ಸುಮಾರು 20 ಗಂಟೆ ಅವಧಿಯ ಸಾಕ್ಷ್ಯಚಿತ್ರ ತಯಾರಿಸಿ ಕ.ಸಾ.ಪ.ದಲ್ಲಿ ಸಂಗ್ರಹಿಸಿಡಲಾಗುವುದು. ಅದನ್ನು ಸಂಕ್ಷಿಪ್ತವಾಗಿ ತಿಳಿಸುವ ಹಿನ್ನಲೆಯಲ್ಲಿ ಮುಖ್ಯಾಂಶಗಳನ್ನೊಳಗೊಂಡ ತಲಾ 1 ಗಂಟೆ 20 ನಿಮಿಷದ 2 ಸಿ.ಡಿ.ಯನ್ನು ತಯಾರಿಸಲಾಗುವುದು. 3 ತಿಂಗಳೊಳಗೆ ಸಾಕ್ಷ್ಯಚಿತ್ರ ಸಿದ್ಧವಾಗಲಿದೆ’ ಎಂದು ತಿಳಿಸಿದರು.

‘ಪರಿಷತ್ತಿನಿಂದ ಶೀಘ್ರದಲ್ಲೇ ದಕ್ಷಿಣ ದ್ರಾವಿಡ ಜ್ಞಾತಿ ಪದಕೋಶವನ್ನು ಹೊರತರಲಾಗುವುದು. ಇದರಲ್ಲಿ ಕನ್ನಡ, ತಮಿಳು, ತೆಲುಗು, ತುಳು, ಮಲೆಯಾಳಂ ಭಾಷೆಯ ಪದಪುಂಜಗಳನ್ನು ಸೇರಿಸಲಾಗುವುದು. ಈ ಭಾಷೆಯಲ್ಲಿ ಬಳಕೆಯಲ್ಲಿರುವ ಪದಗಳ ಅನುವಾದ  ಕಾರ್ಯ  ನಡೆಯಲಿದೆ. ದ್ರಾವಿಡ ಭಾಷೆಯ ಪರಸ್ಪರ ಸಂಬಂಧಗಳನ್ನು ತಿಳಿಸಿಕೊಡುವುದು ಇದರ ಉದ್ದೇಶ’ ಎಂದರು.

ದೇಶದ್ರೋಹಿ ವಿನಯ್ ನ ಅಂತರಂಗ-ಬಹಿರಂಗ!


ಅರಕಲಗೂಡು: ಕನ್ನಡದ ಹೆಸರಾಂತ ಕಾದಂಬರಿಕಾರ ಅನಕೃ ಹೆಸರಿನಿಂದಾಗಿ ಗುರುತಿಸಲ್ಪಡುತ್ತಿದ್ದ ಅರಕಲಗೂಡು ಇದೀಗ ಉಗ್ರಗಾಮಿ ಚಟುವಟಿಕೆಗೆ ಸಹಕರಿಸಿ ದೇಶದ್ರೋಹಿ ಚಟುವಟಿಕೆ ನಡೆಸುಯತ್ತಿದ್ದ ವಿನಯ್ ಕುಮಾರ್ ಬಂಧನದಿಂದಾಗಿ ರಾಷ್ಟಾಧ್ಯಂತ ಮತ್ತೊಮ್ಮೆ ಗಮನ ಸೆಳೆದಿರುವುದು ದುರಂತದ ಸಂಗತಿ.

ಅರಕಲಗೂಡು ತಾಲೂಕಿನ ರಾಮನಾಥಪುರ ಕೊಡಗು ಗಡಿಯಂಚಿನಲ್ಲಿದ್ದು ಜಿಲ್ಲಾ ಕೇಂದ್ರದಿಂದ 50ಕಿಮಿ ಹಾಗೂ ತಾಲ್ಲೂಕು ಕೇಂದ್ರದಿಂದ 20ಕಿಮಿ ದೂರದಲ್ಲಿದೆ. ರಾಷ್ಟಕೂಟರು-ಹೊಯ್ಸಳರ ಶೈಲಿಯ ಶಿಲ್ಪ ಕಲೆಯ ದೇಗುಲಗಳ ಸಮುಚ್ಚಯ ಹಾಗೂ ಕಾವೇರಿ ಹೊಳೆ ಇಲ್ಲಿ ಹರಿಯುವುದರಿಂದ ಇದು ಪ್ರಮುಖ ಧಾರ್ಮಿಕ ಕ್ಷೇತ್ರವೂ ಹೌದು. ಅಡಿಕೆ-ಭತ್ತ-ತಂಬಾಕು ಬೆಳೆಯುವ ಮೂಲಕ ಅತ್ಯಂತ ಸಮೃದ್ದಿ ಹಾಗೂ ಸಿರಿತನವೂ ಇಲ್ಲಿದೆಯಾದರೂ ಗ್ರಾಮೀಣ ಪ್ರದೇಶವಾದ ಇಲ್ಲಿ ಆಧುನಿಕತೆಯ ಸೋಂಕು ಇಲ್ಲ .ಇಂತಹ ರಾಮನಾಥಪುರಕ್ಕೆ ವಿನಯ್ ಅಲಿಯಾಸ್ ವಿನಯಕುಮಾರ್(30) ಕುಟುಂಬ ಕಳೆದ 15-20ವರ್ಷಗಳ ಹಿಂದೆ ಕೊಡಗಿನಿಂದ ವಲಸೆ ಬಂದು ಗ್ರಾಮದಲ್ಲಿ ನೆಲೆಸಿತ್ತು. ತಂದೆ ಇಲ್ಲದ ವಿನಯ್ ತನ್ನ ತಾಯಿ ಮಡಿಕೆರಿಯಮ್ಮ ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದ. ತಾರುಣ್ಯದ ಆರಂಭದಲ್ಲಿ ಶ್ರಮವಿಲ್ಲದೇ ದುಡ್ಡು ಸಂಪಾದಿಸುವ ಹಪಾಹಪಿಗೆ ಬಿದ್ದ ಈತ ರೈಸ್ ಪುಲ್ಲಿಂಗ್, 20ಕಾಲುಗಳ ಆಮೆ, 2ತಲೆ ಬಿಳಿ ಹಾವು ಇತ್ಯಾಧಿಗಳ ಬೆನ್ನು ಹತ್ತಿ ತಮಿಳುನಾಡು ,ಕೇರಳ ಹಾಗೂ ಆಂಧ್ರಪ್ರದೇಶಗಳಿಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ನಂತರ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರು ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಲೈವ್ ಬ್ಯಾಂಡ್ ನಲ್ಲೂ ಕೆಲ ಕಾಲ ಭೌನ್ಸ್ರರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಈ ಮದ್ಯೆ ಈತನ ಸಹೋದರಿಯರ ಮದುವೆಯಾಗಿದ್ದು, ತಾಯಿ ಸುಬ್ರಹ್ಮಣ್ಯೇಶ್ವರ ಧೇಗುಲದೆದರುರು ಹೂವು-ಹಣ್ಣು ಮಾರಾಟ ಮಾಡಿ ಜೀವನ ಸಾಕುತ್ತಾರೆ. ಆದರೆ ವಿನಯ್ ಶ್ರೀಮಂತಿಕೆ ಮತ್ತು ಸುಖದ ಜೀವನದ ಹಂಬಲಕ್ಕೆ ಬಿದ್ದು ಅಪಹರಣ, ವಂಚನೆಯಂತಹ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಮತ್ತು ಹಾಸನದ ಪೋಲೀಸ್ ಪೇದೆಯೊಬ್ಬರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಈತನ ಅಸಲಿಯತ್ತು ತಿಳಿದ ಮೇಲೆ ಆಕೆ 2ವರ್ಷಗಳ ಹಿಂದೆ ಈತನನ್ನು ತೊರೆದಿದ್ದಾಳೆ. ಒಂದೂವರೆವರ್ಷಗಳ ಹಿಂದೆ ಮಂಗಳೂರಿನಲ್ಲಿದ್ದ ಕೇರಳ ಮೂಲಕ ಉದ್ಯಮಿಯೊಬ್ಬರನ್ನು ತನ್ನ ತಂಡದೊಂದಿಗೆ ಅಪಹರಿಸಿ ರಾಮನಾಥಪುರದ ತನ್ನ ಮನೆಯಲ್ಲಿ ಕೂಡಿಹಾಕಿ ಒತ್ತೆ ಹಣಕ್ಕೆ ಬೆದರಿಕೆ ಇಟ್ಟಿದ್ದ, ಮೂರು ತಿಂಗಳ ನಂತರ ಕೇರಳ-ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒತ್ತೆ ಬಿಡಿಸಿ ವಿನಯ್ ನನ್ನು ಜೈಲಿಗಟ್ಟಿದ್ದರು. ಜೈಲಿನಿಂದ ಹಿಂತಿರುಗಿದ ಈತ ಹಳ್ಳಿಯಲ್ಲಿ ಜನರ ವಿಶ್ವಾಸ ಬೆಳೆಸಿ ಹಲವು ಚೀಟಿಗಳನ್ನು ಹಾಕಿದ್ದ ಮತ್ತು ಬೇರೆ ಬೇರೆ ಮಾದರಿಯ ಕಾರುಗಳನ್ನು ತಂದು ಶೋಕಿ ಜೀವನ ನಡೆಸುತ್ತಿದ್ದ. ಗ್ರಾಮದಲ್ಲಿ ಸಭ್ಯನಂತೆ ಬದುಕುತಿದ್ದ ಈತನನ್ನು ಬೆಂಗಳೂರಿನ ಪೋಲೀಸರು ಕಳೆದ ಬುಧವಾರವೇ ಬಂಧಿಸಿ ಕರೆದೊಯ್ದಿದ್ದರು. ಇದೀಗ ವಿನಯನ ದೇಶದ್ರೋಹಿ ಪಾತಕಗಳು ಬಯಲಾಗಿದ್ದು ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಆತನ ಮನೆಯಿಂದಲೂ ಪೋಲೀಸರು ಹಲವು ಮುಖ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ , ಆತನ ಮನೆಗೀಗ ಬೀಗ ಜಡಿಯಲಾಗಿದೆ ಆತನ ತಾಯಿ ಹಾಗೂ ಸಂಬಂಧಿಕರು ಸಂಪರ್ಕ ಸದ್ಯಕ್ಕೆ ಲಭ್ಯವಾಗಲಿಲ್ಲ.
ಅರಕಲಗೂಡು: ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ಸಹಿಸದೇ ಮಾಜಿ ಶಾಸಕ ಎ ಟಿ ರಾಮಸ್ತಾಮಿ ವೈಯುಕ್ತಿಕ ಹಿತಾಸಕ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ಕುರಿತು ದೂರುನೀಡುವ ಮೂಲಕ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ. ಕತ್ತಿಮಲ್ಲೇನಹಳ್ಲಿ ಏತ ನೀರಾವರಿ ಬಳಿಯ ಛಾನೆಲ್ ಗೆ ನೀರು ಹರಿಸುವ ಹಾಗೂ ಭಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು, ನಿನ್ನೆ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಪರಿಶೀಲಿಸಿರುವುದು ಗಮನಕ್ಕೆ ಬಂದಿದೆ, ತಪ್ಪು ಕಂಡು ಬಂದರೆ ಕ್ರಮ ಜರುಗಿಸಲಿ ಅದಕ್ಕೆ ತಮ್ಮ ಅಭ್ಯಂತರವಿಲ್ಲ ಆದರೆ ಯೋಜನೆ ಅನುಷ್ಠಾನದಲ್ಲಿ ಆಗಿರುವ ಸಣ್ಣಪುಟ್ಟ ಲೋಪದೋಷಗಳನ್ನು ದೊಡ್ಡದೆಂದು ಬಿಂಬಿಸಿ ಅಭಿವೃದ್ದಿಗೆ ಅಡ್ಡಿಪಡಿಸುವ ಕ್ರಿಯೆಯನ್ನು ತಾವು ಸಹಿಸುವುದಿಲ್ಲ ಎಂದರು. ಕೂಲಿ ಕಾರರ ಹಣ ಶೀಘ್ರವಾಗಿ ಬಿಡುಗಡೆ ಆಗಬೇಕು ಆದರೆ ಸರಕು-ಸಾಮಾಗ್ರಿ ವೆಚ್ಚದ ಬಗ್ಗೆ ತಕರಾರು ತೆಗೆದಿರುವುದು ಸರಿಯಲ್ಲ ಸಾಮಾಗ್ರಿ ವೆಚ್ಚ ಬಿಡುಗಡೆಯಾಗದೇ ಕೆಲಸ ಮಾಡುವುದಾದರೂ ಹೇಗೆ ಎಂದರು. ಮಾಜಿ ಶಾಸಕರು ಅವರ ಅಧಿಕಾರಾವಧಿಯಲ್ಲಿ ಅವರ ೂರಿನಲ್ಲೆ ಎಷ್ಟರ ಮಟ್ಟಿಗೆ ಕಾಮಗಾರಿ ಮಾಡಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ರಾಮನಾಥಪುರದಲ್ಲಿ ಪಟ್ಟಾಭಿರಾಮ ಪ್ರೌಡಶಾಲೆಯ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಿ ಬಿಲ್ ಮಾಡಲಾಗಿದೆ ಇದನ್ನೇಕೆ ಮಾಜಿ ಶಾಸಕರು ದೂರಲಿಲ್ಲ ಎಂದು ಪ್ರಶ್ನಿಸಿದ ಅವರು ಮಾಜಿ ಶಾಸಕರು ಒತ್ತುವರಿ ಸಮಿತಿ ಅಧ್ಯಕ್ಷರಾಗಿದ್ದವರು ತಾಲೂಕಿನಲ್ಲಿ ಅವರು ಮತ್ತು ಅ ವರ ಶಿಷ್ಯರು ಎಷ್ಟು ಪ್ರಮಾಣದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ , ಅದನ್ನು ತೆರವುಗೊಳಿಸಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಿ ಅದನ್ನು ಬಿಟ್ಟು ಅಭಿವೃದ್ದಿ ಸಹಿಸದೇ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಪತ್ರ ಬರೆದಿದ್ದಾರೆ ಎಂದು ಲೇವಡಿ ಮಾಡಿದರು. .